ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ ‘ಬುಲೆಟ್ ಬಸ್ಯಾ ಚಿತ್ರಕ್ಕಾಗಿ ಯೋಗರಾಜ್ಭಟ್ ಅವರು ಬರೆದಿರುವ ‘ಕಾಲ್ ಕೇಜಿ ಕಡ್ಲೆಕಾಯ್ ಮೇಯ್ತಾ ಇದೆ ರೋಡಲ್ಲಿ ಪಾಸ್ ಆದ್ಲು ಕಣ್ಣ ಮುಂದೆ ಎಂಬ ಹಾಡನ್ನು ನಾಯಕ ಶರಣ್ ಅರ್ಜುನ್ಜನ್ಯ ಸ್ಟುಡಿಯೊದಲ್ಲಿ ಹಾಡಿದ್ದಾರೆ. ಅರ್ಜುನ್ಜನ್ಯ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಜಯತೀರ್ಥ ನಿರ್ದೇಶನದ ಈ ಚಿತ್ರಕ್ಕೆ ಸುಜ಼್ಞಾನ್ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಹರ್ಷ, ಮುರಳಿ ನೃತ್ಯ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಶರಣ್, ಹರಿಪ್ರಿಯ, ಗಿರಿ ಗೋಧುಳಿ, ಪ್ರಶಾಂತ್ ಸಿದ್ದಿ, ಸಾಧುಕೋಕಿಲ, ರಮೇಶ್ಭಟ್, ಗಿರಿಜಾ ಲೋಕೇಶ್, ಯತಿರಾಜ್ ಜಗ್ಗೇಶ್, ಮುನಿ, ನೀನಾಸಂ ಅಸ್ವತ್, ತನ್ವೀರ್ ಮುಂತಾದವರಿದ್ದಾರೆ.